ಶಂಕರ ಮೂವೀಸ್ ಲಾಂಛನದಲ್ಲಿ ಬಿ.ಕೆ.ಗಂಗಾಧರ್ ಹಾಗೂ ಬಿ.ಬಸವರಾಜ್ ನಿರ್ಮಿಸಿರುವ ‘ಶರಣ್ ಅಧ್ಯಕ್ಷ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಂದಕಿಶೋರ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ಶರಣ್ ಅಭಿನಯಿಸಿದ್ದಾರೆ. ಹೇಬಾಪಾಟೀಲ್, ಅಸ್ಮಿತಾಸೂದ್, ರವಿಶಂಕರ್, ಚಿಕ್ಕಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ಯೋಗರಾಜಭಟ್, ಕೆ.ಕಲ್ಯಾಣ್ ಹಾಗೂ ವಿ.ನಾಗೇಂದ್ರಪ್ರಸಾದ್ ರಚಿಸಿದ್ದಾರೆ.
ಸುಧಾಕರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ಹರ್ಷ, ಮುರಳಿ ನೃತ್ಯ ನಿರ್ದೇಶನ ರವಿವರ್ಮ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಶಾಂತ್ರಾಚಪ್ಪ ಸಂಭಾಷಣೆ ಬರೆದಿದ್ದಾರೆ.